ರೈತರು ಈ ಕೆಲಸ ಮಾಡದಿದ್ದರೆ ಇನ್ನು ಮುಂದೆ ನಿಮಗೆ ಹಣ ಜಮಾ ಆಗಲ್ಲ

Spread the love
WhatsApp Group Join Now
Telegram Group Join Now

Rtc Adhar link Status Check Online:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನೀವು ಸರ್ಕಾರದ ಯಾವುದೇ ಯೋಜನೆಯ ಲಾಭ(schemes Benefit) ಪಡೆಯಬೇಕಾದರೆ ರೈತರು ಈ ಕೆಲಸ ಮಾಡದಿದ್ದರೆ ಇನ್ನು ಮುಂದೆ ನಿಮಗೆ ಹಣ ಜಮಾ ಆಗಲ್ಲ, ಯಾವ ಕೆಲಸ ಮಾಡಬೇಕು ಹಣ ಜಮಾ ಆಗೋಕೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ

ನಿಮ್ಮ ಪಹಣಿ ಪತ್ರಕ್ಕೆ ನಿಮ್ಮ ಆಧಾರ ಕಾರ್ಡ ಲಿಂಕ್(rtc adhar link) ಆಗಿರುವುದು ಕಡ್ಡಾಯವಾಗಿದೆ.ಸ್ನೇಹಿತರೆ ಅದು ಕೂಡ ನಿಮಗೆ ತಿಳಿದಿದೆ. ಒಂದು ವೇಳೆ ನಿಮ್ಮ ಪಹಣಿ ಪತ್ರಕ್ಕೆ ನಿಮ್ಮ ಆಧಾರ ಕಾರ್ಡ ಲಿಂಕ್ (adhar link) ಆಗಿಲ್ಲದಿದ್ದರೆ ನಿಮಗೆ ಪಿಎಂ ಕಿಸಾನ್ ಹಣ ಹಾಗೂ ಬೆಳೆ ಪರಿಹಾರ ಹಣ ಹಾಗೂ ಬೆಳೆ ವಿಮೆ ಹಣ ಹಾಗೂ ಸರ್ಕಾರದ ಇತರೆ ಯಾವುದೇ ಸಬ್ಸಿಡಿ(Subsidy)ಯ ಪ್ರಯೋಜನವು ನಿಮಗೆ ಸಿಗುವುದಿಲ್ಲ.

ಸ್ನೇಹಿತರೆ ಹೌದು ಇದಕ್ಕಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ನಿಮ್ಮ ಪಹಣಿಗೆ ಆಧಾರ್ ಲಿಂಕ್(Aadhar Link to Pahani) ಮಾಡುವ ಸುಲಭ ವಿಧಾನವನ್ನು ನಾವು ಈ ಕೆಳಗೆ ತಿಳಿಸಿದ್ದೇವೆ ಓದಿ

ರೈತರು ಈ ಕೆಲಸ ಮಾಡದಿದ್ದರೆ ಇನ್ನು ಮುಂದೆ ನಿಮಗೆ ಹಣ ಜಮಾ ಆಗಲ್ಲ Rtc Adhar link Status Check Online 2024 FREE
  • ಹಂತ -1) ಮೊದಲು ನಾವು ಈ ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • https://landrecords.karnataka.gov.in/service4
  • ಹಂತ -2) ನಂತರ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಕೆಳಗೆ ನೀಡಲಾಗಿರುವ ಕ್ಯಾಪ್ಚ ಹಾಕಿ send otp ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -3) ನಂತರ ನೀವು ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ OTP ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -4) ನಂತರ ನಿಮ್ಮ ಆಧಾರ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಹಾಕಿ ಕೆಳಗೆ ನೀಡಲಾಗಿರುವ ಚಿಕ್ಕ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಟಿಕ್ ಮಾಡಿ verify ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -5) ನಂತರ ನಿಮ್ಮ ಆಧಾರ್ ಕಾರ್ಡ್ ಅನ್ನು ಯಶಸ್ವಿಯಾಗಿ verify ಮಾಡಲಾಗಿದೆ ಎಂದು ಕಾಣಿಸುತ್ತದೆ.ನಂತರ ok ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -6) ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಕೆಳಗೆ ನೀಡಲಾಗಿರುವ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಟಿಕ್ ಮಾಡಿ ಒಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -7) ನಂತರ ನಿಮಗೆ ಹೊಸದೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಜಿಲ್ಲೆ ಹಾಗೂ ನಿಮ್ಮ ವಿಳಾಸ ಹಾಗೂ ನಿಮ್ಮ ಫೋಟೋ ಕಾಣಿಸುತ್ತದೆ.
  • ಹಂತ -8)ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆಗ ನಿಮಗೆ ನಿಮ್ಮ ಆಧಾರ್ ನಂಬರ್ ಗೆ ಯಾವ ಪಹಣಿಗೆ ಲಿಂಕ್ ಆಗಿದೆ ಹಾಗೂ ಯಾವ ಸರ್ವೇ ನಂಬರ್ ಲಿಂಕ್ ಆಗಿದೆ ಎಂಬುದು ನಿಮಗೆ ಕಾಣಿಸುತ್ತದೆ.

ಒಂದು ವೇಳೆ ಲಿಂಕ್ ಆಗಿಲ್ಲದಿದ್ದರೆ ಭೂಮಿ ಲಿಂಕ್ ಡಿಟೇಲ್ ನಲ್ಲಿ ಕೇಳಲಾದ ಮಾಹಿತಿಯನ್ನು ತುಂಬಿ ಸರ್ವೇ ನಂಬರ್ ಹಾಕಿ ಲಿಂಕ್ ಮಾಡಿಕೊಳ್ಳಿ.ಸ್ನೇಹಿತರೆ ಈ ರೀತಿಯಾಗಿ ರೈತರು ಸುಲಭವಾಗಿ ಮನೆಯಲ್ಲಿ ಕುಳಿತು ತಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಸರ್ಕಾರದ ಎಲ್ಲಾ ಯೋಜನೆಗಳ ಲಾಭವು ಪಡೆಯಬಹುದು ಅಂತ ಹೇಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment