Drought relief fund 2023 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರಿಗೆ ಗೂಡ್ ನ್ಯೂಸ್! ಒಂದು ವಾರದೊಳಗೆ ರೈತರಿಗೆ ಮತ್ತೆ ಸಿಗಲಿದೆ 3000ರೂ. ಬರ ಪರಿಹಾರ | ಸಚಿವ ಬೈರೇಗೌಡ ರಿಂದ ಅಧಿಕೃತ ಘೋಷಣೆ Drought relief fund 2023
ಕರ್ನಾಟಕ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬದವರಿಗೆ ಜೀವನೋಪಾಯಕ್ಕಾಗಿ ಸರಿಯಾದ ಪರಿಹಾರವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರವು 2023 24 ನೇ ಸಾಲಿನ ಬೆಳೆ ನಷ್ಟವಾಗಿರುವ ರಾಜ್ಯದ ರೈತರಿಗೆ ಮುಂದಿನ ಒಂದು ವಾರದೊಳಗೆ 2800ರೂ. ನಿಂದ 3000ರೂ. ತನಕ ಬರ ಪರಿಹಾರ ವನ್ನು ನೀಡಲು ಸರ್ಕಾರವು ತೀರ್ಮಾನ ಮಾಡಿದೆ.ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಪೂರ್ತಿ ಓದಿ.
Table of Contents
Drought relief fund 2023

Drought Relief Fund – ಬರ ಪರಿಹಾರ ಘೋಷಣೆ
ಕರ್ನಾಟಕ ರಾಜ್ಯದ ಸುಮಾರು 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬದವರಿಗೆ ಜೀವನೋಪಾಯದ ನಷ್ಟ ಪರಿಹಾರಕ್ಕಾಗಿ 2800 ರೂಪಾಯಿ ಇಂದ 3000 ರೂಪಾಯಿವರೆಗೆ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರವು ತೀರ್ಮಾನವನ್ನು ಮಾಡಿದ್ದು ಸಚಿವರಾದಂತಹ ಶ್ರೀ ಬೈರೇಗೌಡ ಅವರು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದಾರೆ. ಇದರ ಅನ್ವಯ ಮಳೆಯಾಶ್ರಿತ ಮತ್ತು ನಾಲೆಗಳ ಕೊನೆಯ ಭಾಗದತ ಪ್ರದೇಶದ ರೈತರಿಗೆ ಕೂಡ ಬೆಳೆ ನಷ್ಟ ಪರಿಹಾರವನ್ನು ನೀಡಲು ಸರ್ಕಾರವು ಮುಂದಾಗಿದೆ.
ಮುಂದಿನ ಒಂದು ವಾರದೊಳಗೆ ಪಾವತಿ ಮಾಡಲು ಪೂರ್ಣ ಸಿದ್ಧತೆ!
ಕೇಂದ್ರ ಸರ್ಕಾರದಿಂದ ಕಳೆದ ತಿಂಗಳಿನಲ್ಲಿ 3,454 ಕೋಟಿ ರೂಪಾಯಿ ನಮ್ಮ ಕರ್ನಾಟಕ ಸರ್ಕಾರಕ್ಕೆ ಅನುಧಾನವನ್ನು ದೊರೆತಿತ್ತು. ಈ ಒಂದು ಹಣದಲ್ಲಿ ಈಗಾಗಲೇ ರಾಜ್ಯದ 27.50 ಲಕ್ಷ ಕುಟುಂಬದ ರೈತರಿಗೆ 2,451 ಕೋಟಿ ರೂಪಾಯಿ ಬರ ಪರಿಹಾರದ ಹಣವನ್ನು ಮೇ ತಿಂಗಳಿನ ಮೊದಲವಾರದಲ್ಲಿ ವಿತರಿಸಲಾಗಿದು.
ಈ ಅನುದಾನದಲ್ಲಿ ಉಳಿದಿರುವಂತಹ ಹಣದ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ 272 ಕೋಟಿ ರೂಪಾಯಿಯನ್ನು ಸೇರಿಸಿ ಮತ್ತೆ ರೈತರಿಗೆ ಪರಿಹಾರ ನೀಡಲು ಸರ್ಕಾರವು ತೀರ್ಮಾನಮಾಡಿದ್ದು ರೈತರಗಳ ಮುಖದಲ್ಲಿ ಮಂದಹಾಸವನ್ನು ಕೂಡ ತಂದಿದೆ.
ಇದರ ಅನ್ವಯ ಮುಂದಿನ ಒಂದುವಾರದೊಳಗೆ ರೈತರಗಳ ಖಾತೆಗೆ ಪಾವತಿ ಮಾಡಲು ಅಧಿಕಾರಿಗಳಿಗೆ ಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ರಾಜ್ಯದ 7 ಲಕ್ಷ ರೈತರಿಗೆ ಪ್ರಯೋಜನವಾಗುವುದು.
ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗುತ್ತಿರುವ ಮುಂಗಾರು ಮಳೆಯ ಸ್ಥಿತಿಯ ಬಗ್ಗೆ ಅವಲೋಕನ ಮಾಡಿದ್ದು ಹಾಗೂ ಪೂರ್ವ ಮುಂಗಾರು ಈಗಾಗಲೇ ಸುಮಾರು 115mm ಮಳೆ ಉಂಟಾಗಿದೆ. ಇದರ ಅರ್ಥ ರಾಜ್ಯದಲ್ಲಿ ಶೇ. 78ರಷ್ಟು ಹೆಚ್ಚುವರಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಹಿಂದಿನ ವರ್ಷದಲ್ಲಿ ವಾಡಿಕೆಗಿಂತ ಶೇ. 71 ರಷ್ಟು ಮಳೆ ಕೊರತೆಯು ಉಂಟಾಗಿತ್ತು.
ಬೆಳೆ ವಿಮೆಯಿಂದಲೂ ಭಾರಿ ಪರಿಹಾರ :
ಈ ವರ್ಷ ರಾಜ್ಯದ ರೈತರಿಗೆ ಬೆಳೆ ವಿಮೆ ಮುಖಾಂತರವೂ ಕೂಡ 1,654 ಕೋಟಿ ರೂಪಾಯಿ ಪರಿಹಾರ ದೊರೆತಿದೆ. ಇದರಲ್ಲಿ ಇನ್ನೂ 130 ಕೋಟಿ ರೂಪಾಯಿ ಬರುವುದು ಬಾಕಿ ಇದೆ. ಈಗ ಮತ್ತೆ ನೀಡುತ್ತಿರುವ ಬರ ಪರಿಹಾರದ ಹಣಕ್ಕಾಗಿ ರೈತರು ಮುಂದಿನ ಒಂದು ವಾರದವರೆಗೆ ಕಾಯಬೇಕಾಗಿದೆ , ಒಂದು ವಾರದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ನೋಡಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು