Bara Parihara Hana : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಯಾವ ರೀತಿ ಚೆಕ್ ಮಾಡುವುದು ಹಾಗೂ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಹಾಗೂ ಯಾವ ರೈತರಿಗೆ ಮೂರನೇ ಕಂತಿನ ಹಣವು ಬಿಡುಗಡೆ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ.
Table of Contents

Bara Parihara Hana ಬರ ಪರಿಹಾರ ಹಣ..?
ನಮ್ಮ ಕರ್ನಾಟಕದಲ್ಲಿ 2023-24 ವರ್ಷಕ್ಕೆ ಸಂಬಂಧಿಸಿದಂತೆ ಸರಿಯಾದ ಸಮಯಕ್ಕೆ ಮಳೆ ಆಗದೆ ಇರುವುದು ಹಾಗೂ ತೀವ್ರ ಬರ ಪರಿಸ್ಥಿತಿಯು ಎದುರಾಗಿದೆ ಇದರಿಂದ ರೈತರ ಬೆಳೆ ತುಂಬಾ ಹಾನಿಯಾಗಿದ್ದು ಮತ್ತು ನಷ್ಟ ಉಂಟಾಗಿದೆ ಇದರಿಂದ ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ರೈತರಿಗೆ ನೆರವು ನೀಡಲು ಈಗಾಗಲೇ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು. ತುಂಬಾ ರೈತರಿಗೆ ಈಗಾಗಲೇ ಬರ ಪರಿಹಾರ ಹಣವು ಜಮಾ ಆಗಿದೆ
ಕರ್ನಾಟಕದಲ್ಲಿ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಮೊದಲನೇ ಕಂತಿನ ಹಣವನ್ನು 2000 ಬಿಡುಗಡೆ ಮಾಡಲಾಗಿತ್ತು ಹಾಗೂ ಕೇಂದ್ರ ಸರಕಾರ ಕಡೆಯಿಂದ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೆರವು ಸುಮಾರು 3454 ಕೋಟಿ ರೂಪಾಯಿ ಹಣವು ಕೇಂದ್ರ ಸರ್ಕಾರ ಕಡೆಯಿಂದ ರೈತರಿಗೆ ಬರ ಪರಿಹಾರವು ನೀಡಲು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ ಅದರಂತೆ ರಾಜ್ಯ ಸರ್ಕಾರವು ಈಗ ಮೇ ತಿಂಗಳಿನಲ್ಲಿ 2ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಸುಮಾರು ರೈತರು ಹಣವನ್ನು ಪಡೆದುಕೊಂಡಿದ್ದಾರೆ
Bara Parihara Amount ಮೂರನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ.?
ಈಗಾಗಲೇ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಮೂರನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಮೇ ಕೊನೆಯ ವಾರದಲ್ಲಿ ಹಾಗೂ ಜೂನ್ ಮೊದಲ ವಾರದ ವರೆಗೆ ಮೂರನೇ ಕಂತಿನ ಬರ ಪರಿಹಾರ ಹಣವು ಬಿಡುಗಡೆ ಮಾಡುತ್ತಿದ್ದಾರೆ
ಈ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಬಿಡುಗಡೆ ಮಾಡಲಾಗಿದ್ದು ನೀವು ಐದು ಎಕರೆಗಿಂತ ಕಡಿಮೆ ಭೂಮಿಯನ್ನು ಅಥವಾ ಭೂಮಿಯನ್ನು ಹೊಂದಿದ್ದರೆ ನಿಮಗೆ ಬರ ಪರಿಹಾರದ ಮೂರನೇ ಕಂತಿನ ಹಣವು ಬಿಡುಗಡೆ ಆಗಿರುತ್ತೆ
Bara Parihara Payment ಬರ ಪರಿಹಾರದ ಮೂರನೇ ಕಂತಿನ ಹಣ ಹೇಗೆ ಚೆಕ್ ಮಾಡುವುದು.?
ನೀವೇನಾದರೂ ಬರ ಪರಿಹಾರದ ಹಣವನ್ನು ಆಧಾರ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಬೇಕು ಅಂದುಕೊಂಡಿದ್ದರೆ ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಅದರ ಮೂಲಕ ನೀವು ಬರ ಪರಿಹಾರ ಹಣವನ್ನು ಚೆಕ್ ಮಾಡಬಹುದು
- https://parihara.karnataka.gov.in/service92
- ಮೊದಲು ನಾವು ಮೇಲೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಡು ನಂತರ ನೀವು ಬರ ಪರಿಹಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ಆಗುತ್ತೀರಾ.
- ನಂತರ ಅಲ್ಲಿ ನೀವು 2023-24 ವರ್ಷವನ್ನು ಆಯ್ಕೆ ಮಾಡಿಕೊಳ್ಳಿ . ನಂತರ ಋತುವನ್ನು (ಮುಂಗಾರು) ಎಂದು ಆಯ್ಕೆ ಮಾಡಬೇಕು ನಂತರ ಕೆಳಗಡೆ (ಬರ) ಎಂದು ಆಯ್ಕೆ ಮಾಡಬೇಕು ನಂತರ ನೀವು ಹುಡುಕು (Get data) ಎಂಬ ನೇರಳೆ ಬಣ್ಣದ ಎಬ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ನಿಮಗೆ ಅಲ್ಲಿ ನಾಲ್ಕು ಆಯ್ಕೆಗಳು ಕಾಣುತ್ತವೆ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಬರ ಪರಿಹಾರ ಹಣ ಚೆಕ್ ಮಾಡಬಹುದು ಅಥವಾ ಅಲ್ಲಿ ನೀಡಲಾದ ನಾಲ್ಕು ಆಯ್ಕೆಗಳಲ್ಲಿ ಯಾವುದಾದರೂ ಒಂದುಅನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನೀವು ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಅಥವಾ ನೀವು ಯಾವುದು ಆಯ್ಕೆ ಮಾಡಿದ್ದೀರಾ ಎಂಟರ್ ಮಾಡಬೇಕು ನಂತರ ಅಲ್ಲಿ ಕೆಳಗಡೆ (fetch/ಪಡೆಯರಿ) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ನಿಮಗೆ ಅಲ್ಲಿ ಬೆಳೆ ಪರಿಹಾರ ಅಥವಾ ಬರ ಪರಿಹಾರ ಹಣದ ಬಿಡುಗಡೆ ಎಲ್ಲಾ ಲಿಸ್ಟು ನೋಡಲು ನಿಮಗೆ ಸಿಗುತ್ತದೆ ಹಾಗೂ ಇಲ್ಲಿವರೆಗೂ ಎಷ್ಟು ಬೆಳೆ ಪರಿಹಾರ ಹಣವು ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು ಹಾಗೆ ನೋಡಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು